Tuesday, February 03, 2009

ಕೆರೆಮನೆ ಶಂಭು ಹೆಗಡೆ ನಿಧನ

ಯಕ್ಷಗಾನ ಕ್ಷೇತ್ರದ ಮಹಾನ್ ಕಲಾವಿದರಾಗಿದ್ದು, ಆ ಕಲೆಯ ಬಗ್ಗೆ ಅವರ ಕುಣಿತದಷ್ಟೇ ಅದ್ಭುತವಾಗಿ ಮಾತನಾಡುತ್ತಾ, ಕಲೆಯನ್ನು ಜೀವಂತವಾಗಿ ಉಳಿಸಲು ಶ್ರಮಿಸುತ್ತಾ ಇಡೀ ಜೀವನವನ್ನು ಸವೆಸಿ, ಕಡೆಗೆ ಇವತ್ತು ಕುಣಿಯುತ್ತಲೇ ಕುಸಿದು ಹೊರಟುಹೋದರಂತೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಹಿರಿಯ ಚೇತನ ಶ್ರೀ ಕೆರೆಮನೆ ಶಂಭು ಹೆಗಡೆಯವರು. ಯಕ್ಷಗಾನದಂತಹ ಅದ್ಭುತ ಕಲೆಯ ಬಗ್ಗೆ ಕಿಂಚಿತ್ತಾದರೂ ಆಸಕ್ತಿ ಇದ್ದು ಅದನ್ನು ಆಸ್ವಾದಿಸಿದವರಿಗೆ ಶಂಭು ಹೆಗಡೆಯುವರ ಬಗ್ಗೆ ಆಗಲೀ, ’ಕೆರೆಮನೆ’ ಬಗ್ಗೆ ಆಗಲೀ ಏನೂ ಹೇಳಬೇಕಿಲ್ಲ.

ಹಲವಾರು ವರ್ಷಗಳ ನಂತರ ಶಂಭು ಹೆಗಡೆಯವರ ಯಕ್ಷಗಾನವನ್ನು ತುಂಬಾ ಹತ್ತಿರದಿಂದ ನೋಡಿ ಹೃದಯ ತುಂಬಿಸಿಕೊಳ್ಳುವ ಅದೃಷ್ಟ ನನ್ನದಾಗಿದ್ದು ಅವರು ೨೦೦೬ ನವಂಬರ್‌ನಲ್ಲಿ ಶಿಕಾಗೋಗೆ ಬಂದಾಗ. ಅವರು ಆಡಿದ ’ಜರಾಸಂಧ ವಧೆ’ ಎಂದಿಗೂ ಮರೆಯಲಾಗದ ಅನುಭವವಾಗಿ, ಈಗ ಆ ಅನುಭವಕ್ಕೆ ಮತ್ತಷ್ಟು ವಿಶೇಷ ಸ್ಥಾನ ದೊರಕಿಹೋಗಿದೆ. ಇನ್ನೇನಿದ್ದರೂ ಅವರನ್ನು ಮನಸ್ಸಿನ ಅಥವಾ ದೂರದರ್ಶನದ ತೆರೆಯ ಮೇಲೆ ಮಾತ್ರ ನೋಡಲು ಸಾಧ್ಯ. ಹಾಗಾಗೇ, ಅವರ ಕುಣಿತದ ಸಂದರ್ಭದಲ್ಲಿ ನಾನು ತೆಗೆದ ಕೆಲವು ಚಿತ್ರಗಳು ನನ್ನ ತುಂಬಾ ನೆಚ್ಚಿನ ಚಿತ್ರಗಳಲ್ಲಿ ಕೆಲವಾಗಿ ಉಳಿದುಬಿಡುತ್ತವೆ. ಇಲ್ಲಿ ಕೆಲವಿವೆ:











2 comments:

Anonymous said...

oh!!! I love yakshagana!
I am sorry 'I couldn't read that much kannada all at once. But I'll make sure I read it when I have time!

Srikanth said...

ನಿಮ್ಮ ಚಿತ್ರಗಳು ಶಂಭು ಅವರ ಕುಣಿತದಷ್ಟೇ ಸುಂದರವಾಗಿವೆ.